ಪಾಂಡವರ ಜೀವನದ ಅರ್ಥ ತಿಳಿಯಬೇಕಾದರೆ ಸ್ವರ್ಗಾರೋಹಣ ಪರ್ವದವರೆಗೂ ತಿಳಿಯಬೇಕು. ಕೊನೆಯಲ್ಲಿ ಒಬ್ಬೊಬ್ಬರೇ ಸಾವನ್ನಪ್ಪುತ್ತಿದ್ದಾಗ ಅವರ ಜೀವನದ ಬಗ್ಗೆ ಭೀಮನಿಗೆ ಯುಧಿಷ್ಟಿರ ಹೇಳುತ್ತಾ ಹೋಗುತ್ತಾನೆ. ಧರ್ಮಮಾರ್ಗದಲ್ಲಿ ನಡೆಯುವವರಿಗೆ ದೊರಕುವ ಫಲ ಎಂಥದ್ದು? ಭಗವಂತನ ಶಕ್ತಿ ಎಲ್ಲಿದೆ? ದುರ್ಯೋಧನನ ಸ್ವರ್ಗಪ್ರಾಪ್ತಿಯ ರಹಸ್ಯವೇನು? ಉಳಿದ ಪಾಂಡವರ ನರಕ ವಾಸದ ರಹಸ್ಯ, ಯುಧಿಷ್ಟಿರನ ನರಕದರ್ಶನದ ರಹಸ್ಯ, ವೈಕುಂಠ ಪ್ರಾಪ್ತಿ ಯಾರಿಗೆ ಸಿಗುತ್ತದೆ? ವೈಕುಂಠ ಪ್ರಾಪ್ತಿಗಾಗಿ ಜೀವನ ಕರ್ತವ್ಯವೇನು? ಇವೆಲ್ಲಕ್ಕೂ ಸ್ವರ್ಗಾರೋಹಣ ಪರ್ವದಲ್ಲಿ ಉತ್ತರ ಸಿಗುತ್ತದೆ. ಉಳಿದ ಹದಿನೇಳು ಪರ್ವಗಳು ಲೌಕಿಕ ಘಟನೆಗಳನ್ನು ಹೇಳುತ್ತಾ ಪಾರಮಾರ್ಥದ ದಾರಿಗೆ ಕೊಂಡೊಯ್ಯುವ ಕೆಲಸವಾದರೆ, ಸ್ವರ್ಗಾರೋಹಣ ಪರ್ವ ಇವೆಲ್ಲವನ್ನೂ ಮೀರಿದ ಅಲೌಕಿಕ ಅಲೋಚನೆಗಳು ನಮ್ಮಲ್ಲಿ ಮೂಡುವಂತೆ ಮಾಡುತ್ತದೆ.